ಸಮಾಧಿ ಯೋಗ

ಎಲರು ತೀಡಿದಷ್ಟು
ಕುಣಿವ ಎಲೆಗಳ ಭಂಗಿ
ಪಟಪಟನೇ ಆಡುವ ಮಾತು
ಗಾಳಿಹಾದಿಯ ತುಂಬೆಲ್ಲಾ ಸಿಗುವ ಹೂಗಳು
ಬದುಕೆಂಬ ಚೈತ್ರಕ್ಕೆ ಎಂತಹ ಸೊಗಸು.

ಅವನ ಕಣ್ಣುಗಳು ಸಿಡಿಯುವಾಗ
ಹನಿಗೂಡಿದ ನದಿ ಶಾಂತವಾಗುತ್ತದೆ.
ಆ ಗುಡ್ಡದಾಚೆಗಿನ ಸರಹದ್ದು
ದಾಟಿ ಬಂದು ಎಷ್ಟೋ ದಿನಗಳಾಗಿವೆ.
ಸದ್ದು ಮಾಡುವ ತಮಟೆ ಮಹಾಮೌನಿ.

ನೋವು ಬದಲಿಸುತ್ತದೆ.
ಬದಲಾಗುವುದು ಕೆಂಡದ ಬಣ್ಣವೂ
ಆಗಾಗ ಎಲರ ಸುಳಿಗೆ ಅಂತರ್‍ಲಾಗ ಹಾಕುವ
ಧೌತ ವಸನಗಳು ತಿಪ್ಪೆ ಮೇಲೆ ಬೀಳದಂತೆ
ಗಟ್ಟಿಯಾಗಿ ಕಟ್ಟಬೇಕು ಸರಿಗೆತಂತಿಗೆ

ಸಾಗರನ ದಡದಲ್ಲಿ ಮುತ್ತುವ
ಎಲರ ಮುತ್ತಿನ ಕಚಗುಳಿ
ಗಾಳಿನೀರಿನ ಆಳ ಅಗಲಕ್ಕೆ
ಪ್ರಚಂಡ ಪ್ರತಾಪಕ್ಕೆ ಮರುಕ್ಷಣದ
ಕಿನ್ನತೆ-ನಾನೆಂಬ ಶೂನ್ಯತೆ

ಸಡಗರದ ಎಳೆತ ಸೆಳೆತಗಳ ಕೂಡು ಕೂಟ
ಕ್ಷಣದ ಆಟ ನೋಟ
ನೆನಪ ಹಾಳೆಗಳು ತೆರೆದುಕೊಳ್ಳುವವು
ಗೋಡೆಯ ತುಂಬೆಲ್ಲಾ ಚಿತ್ರಗಳು ರೀಲಿನಂತೆ
ಚಲಿಸಿ ಹೋಗುವವು.
ಮಗುಚಿ ಬೀಳುವುದು ದಪ್ಪಂಚಿನ ಮೇಲ್ಪುಟ
ಮತ್ತೇ ಅದೇ ಸಬ್ಬಕ್ಕಿ ಗಂಜಿ
ಬಿಸಿ ಮಜ್ಜನ ಚಿಕಿತ್ಸೆ ಸಮಾಧಿಯೋಗಕ್ಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿಯ ಅವಸ್ಥಾಭೇದಗಳು
Next post ಎದ್ದು ಬನ್ನಿರೇ ದೇವೀರಮ್ಮಂದಿರೇ…

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys